Friday, September 18, 2015

ಪ್ರಧಾನಿಗಳ ವೈಜ್ಞಾನಿಕ ದೃಷ್ಟಿಕೋನ

IISER-ಪುಣೆಯಲ್ಲಿ ಗಣಿತ ಸಹಪ್ರಾದ್ಯಾಪಕರಾಗಿ ಕೆಲಸ ಮಾಡ್ತಾ ಇರೋ ಡಾ. ಸಿನ್ಹ ಇತ್ತೀಚಿಗೆ ನಡೆದ ನಮ್ಮ ಪ್ರಧಾನಿ-ವಿಜ್ಞಾನಿಗಳ ಸಭೆಯಲ್ಲಿ ಭಾಗವಹಿಸಿದ ಬಗ್ಗೆ ಹೇಳ್ತಾರೆ... (ಗೆಳೆಯ Shiva Kumar D T ಹಂಚಿಕೊಂಡ ಲಿಂಕೊಂದನ್ನು ಆಧಾರವಾಗಿಟ್ಟುಕೊಂಡು)

ಹೊಸ ಪ್ರಧಾನಿಗಳು ಅಧಿಕಾರವಹಿಸಿಕೊಂಡ ಮೇಲೆ ನಮ್ಮ ಮಾಧ್ಯಮಗಳಲ್ಲಿ (ಸೋಶಿಯಲ್ ಮಾಧ್ಯಮವೂ ಸೇರಿ) ಎರಡು ರೀತಿಯ ಅತಿರೇಕಗಳು ಕಾಣಿಸ್ತಾ ಇವೆ, ಒಂದು, ಮೋದಿಯವರು ನಮ್ಮ ದೇಶಕ್ಕೆ ಒದಗಿ ಬಂದಿರುವ ಪವಾಡ ಪುರುಷ, ಅವರು ಕ್ಷಣಮಾತ್ರದಲ್ಲಿ ನಮ್ಮ ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಬಿಡ್ತಾರೆ, ಅದೇ ಇನ್ನೊಂದು ವರ್ಗ, ಪ್ರಧಾನಿಗಳ ಪ್ರತಿಯೊಂದು ನಡೆಯನ್ನೂ ಅನುಮಾನಿಸಿ ನೋಡ್ತಾ ಇದಾರೆ. ಈಗ ನಮ್ಮ ವಿಜ್ಞಾನ ಜಗತ್ತಿನಲ್ಲಿ ಎದ್ದಿರುವ ಬಹುಮುಖ್ಯ ವಿಚಾರವೆಂದರೆ, ಮೋದಿ ವಿಜ್ಞಾನಕ್ಕೆ ಯಾವುದೇ ಪ್ರೋತ್ಸಾಹ ಕೊಡ್ತಾ ಇಲ್ಲ, ಸಿಕ್ಕಾಪಟ್ಟೆ ಬಡ್ಜೆಟ್ ಕಡಿತಗೊಳಿಸಿಬಿಟ್ಟಿದ್ದಾರೆ ಎಂಬುದು. ಆದರೆ ಈ ಬಗ್ಗೆ ಖುದ್ದು ನೋಡಿ ನಿರ್ಧರಿಸುವ ಅವಕಾಶ ಅವರಿಗೆ ಈ ಸಭೆಯ ಆಮಂತ್ರಣದಿಂದ ಸಿಕ್ಕಿದ್ದರಿಂದ ಆ ಸಭೆಗೆ ಅವರು ಹಾಜರಾಗಲು ಉತ್ಸುಹುಕರಾಗಿದ್ದರಂತೆ. ಅವರೇ ಹೇಳಿದ ಹಾಗೆ ಅಲ್ಲಿ ನಡೆದ ಪ್ರತಿಯೊಂದು ವಿಚಾರಗಳನ್ನು ಚಾಚುತಪ್ಪದೆ ವಿವರಿಸಲು ಸಾಧ್ಯವಾಗದಿದ್ದರೂ, ಅವರ ಗ್ರಹಿಕೆಗೆ ನಿಲುಕಿದ್ದನ್ನು ತಮ್ಮ ಬ್ಲಾಗ್ ನ ಮೂಲಕ ವ್ಯಕ್ತ ಪಡಿಸಿದ್ದಾರೆ. ಅಲ್ಲಿಂದ ಕೆಲವೊಂದು ವಿಷಯಗಳನ್ನು ಇಲ್ಲಿ ಹಂಚಿಕೊಂಡಿರುವೆ.

ಮೊದಲನೆಯದಾಗಿ, ಪ್ರಧಾನಿಗಳು ಎಲ್ಲಾ ವಿಜ್ಞಾನಿಗಳು ತಮ್ಮ ತಮ್ಮ ವಿಭಾಗಗಳಲ್ಲಿ ಈಗ ನಡೆಯುತ್ತಾ ಇರುವ ಸಂಶೋಧನೆಯಾ ಬಗ್ಗೆ ವಿವರಿಸುತ್ತಾ ಇರುವಾಗ ಪ್ರತಿಯೊಬ್ಬರು ಹೇಳಿದ್ದನ್ನು ಆಸಕ್ತಿಯಿಂದ ಆಲಿಸಿದ್ದು ಅಲ್ಲದೇ ತಮಗೆ ಯಾವುದೇ ಸಂದೇಹವಿದ್ದಲ್ಲಿ ನೇರವಾಗಿ ಆ ವಿಜ್ಞಾನಿಗಳನ್ನೇ ಪ್ರಶ್ನಿಸಿ ತಮ್ಮ ಸಂದೇಹವನ್ನು ಪರಿಹರಿಸಿಕೊಂಡರಂತೆ. ಅದರಲ್ಲೊಂದು 

"ಈಗ ಇರೋ ಕಾಲ್ ಡ್ರಾಪ್ ಸಮಸ್ಯೆ ಯನ್ನು ಗಣಿತ ಸಂಶೋಧನೆಯ ಮೂಲಕ ಬಗೆಹರಿಸಬಹುದೇ?" ಎಂಬುದು. ನಮ್ಮ ದೇಶದಲ್ಲಿ ಸಂಶೋಧನೆಯೇನೋ ನಡೆಯುತ್ತೆ ಆದರೆ ಅದರ ವರ್ಗಾವಣೆ ಜನತೆಗೆ/ಸಮಾಜಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಾ, "ಇಷ್ಟೆಲ್ಲಾ ಕೃಷಿ ಸಂಶೋಧನೆ ನಡೆಯುತ್ತಾ ಇದ್ದರೂ, ನಮ್ಮ ದೇಶದಲ್ಲಿ ಇರೋ ದ್ವಿದಳ ಧಾನ್ಯದ ಇಳುವರಿ ಸಮಸ್ಯೆಯನ್ನು ಯಾಕೆ ಹೋಗಲಾಡಿಸಲಾಗುತ್ತಿಲ್ಲ" ಎಂದು ಹೇಳಿದರಂತೆ.

ವಿಜ್ಞಾನಿಗಳ ಎಲ್ಲ ದೂರು-ದುಮ್ಮಾನಗಳನ್ನು ಬರೆದು ಕೊಂಡ ಪ್ರಧಾನಿ ಕೊನೆಯಲ್ಲಿ,

"ನಿಮ್ಮಲ್ಲೆರ ದೂರುಗಳನ್ನು ಆಲಿಸಿದ್ದೇನೆ ಆದರೆ, ನನ್ನದೂ ಒಂದು ದೂರಿದೆ, ಅದೇನೆಂದರೆ, ನಮ್ಮ ವಿಜ್ಞಾನ ಜಗತ್ತು ತಮ್ಮಲ್ಲಿರೋ ಸಂಪನ್ಮೂಲಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದಿಲ್ಲ, ವಿಶಾಲ ಮನೋಭಾವ ಕಡಿಮೆ. ಪರಸ್ಪರ ಹೊಂದಾಣಿಕೆ ಹಾಗೂ ಅಂತರಶಾಸ್ತ್ರೀಯ (interdisciplinary) ವಿಧಾನದಿಂದ ನಮ್ಮ ದೇಶದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ವಿಜ್ಞಾನದಿಂದ ಪಡೆಯಬೇಕಿದೆ ಎಂದರಂತೆ".

ಹೀಗೆಯೇ ನಮ್ಮ ಈಗಿನ ಪ್ರಧಾನಿಗಳಿಗಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಅಲ್ಲಿ ನಡೆದ ಅನೇಕ ಉದಾಹರಣೆಗಳನ್ನು ಕೊಡುತ್ತಾ ವಿವರಿಸುತ್ತಾ ಹೋಗುತ್ತಾರೆ. ಈ ಸಭೆ ಮುಗಿದಮೇಲೆ, ಸದರಿ ಉಪನ್ಯಾಸಕಿ ಪ್ರಧಾನಿಗಳ ವೈಜ್ಞಾನಿಕ ಮನೋಭಾವನೆ ಬಗ್ಗೆ ಹೇಳುತ್ತಾ, ನಮ್ಮಲ್ಲಿನ ಅನೇಕ ಪತ್ರಕರ್ತರ ಹಾಗೆ ಪ್ರಧಾನಿಗಳ (ನಮೋ) ವೈಜ್ಞಾನಿಕ ದೃಷ್ಟಿಕೋನ ಬರೀ ಗಣೇಶ ಹಾಗೂ ಪ್ಲಾಸ್ಟಿಕ್ ಸರ್ಜರಿಗೆ ಸೀಮಿತವಾಗಿಲ್ಲವೆಂದು ತಿಳಿದುಕೊಂಡೆ ಎನ್ನುತ್ತಾರೆ.


ಒಟ್ಟಿನಲ್ಲಿ ಒಂದೊಳ್ಳೆ ಲೇಖನ, ಓದಿ ನೋಡಿ: http://academic-garden.blogspot.in/2015/08/a-meeting-with-prime-minister.html

No comments:

Post a Comment