ಸನ್ಮಾನ್ಯ ಪ್ರತಾಪ ಸಿಂಹರವರು ತಮ್ಮನ್ನು ಟೀಕೆ ಮಾಡಿದವರಿಗೆ ಪ್ರತ್ಯುತ್ತರ ಕೊಟ್ಟು ಬರೆದ ಪತ್ರವೊಂದನ್ನು ಓದಿದೆ. ಅವರ ಹಿಂದಿನ ಪತ್ರವನ್ನೂ ಓದಿ, ನಾನೂ ನನಗನಿಸಿದ್ದನ್ನು fbನಲ್ಲಿ ಹಂಚಿಕೊಂಡಿದ್ದೆ, ಹಾಗೂ ಬೇರೆಯವರ ಅಭಿಪ್ರಾಯಗಳನ್ನೂ ಗಮನಿಸಿದ್ದೆ. ಯಾಕೋ ಪ್ರತಾಪ್’ರವರು ಕೊಟ್ಟ ಉತ್ತರ ಸ್ವಲ್ಪ ಖಾರವಾಗಿದೆ ಎಂದು ನನಗೆ ಅನಿಸುತ್ತಿದೆ. ವಿಪರ್ಯಾಸವೆಂದರೆ ಸಂಸದರಿಗೆ ತಮ್ಮನ್ನು ಜನ ಯಾವ ವಿಚಾರಕ್ಕಾಗಿ ಟೀಕೆ ಮಾಡಿದ್ದರು ಎಂದು ನೋಡದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಿದ್ದಾರೆ. ನಾನು ಗಮನಿಸಿದ ಪ್ರಕಾರ ಹಲವರು ಸಂಬಳ ಹೆಚ್ಚಳಕ್ಕಿಂತಾ ಹೆಚ್ಚಾಗಿ ಸಂಸದರು ತಮ್ಮ ಮೊದಲ ಪತ್ರದಲ್ಲಿ ಬಳಸಿದ ವಾದಸರಣಿಯನ್ನು ಪ್ರಶ್ನೆ ಮಾಡಿದ್ದಾರೆ. ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ ಹಾಗೆ ಕೆಲವೊಬ್ಬರು ಕಟುವಾದ ಶಬ್ಧಗಳಿಂದ ನಿಂದಿಸಿರಬಹುದು ಆದರೆ ಅನೇಕರ ಪ್ರಶ್ನೆ ಸಾತ್ವಿಕವಾಗಿತ್ತು. ಅಲ್ಲಾ ಈ ಹೊಸ ಪ್ರತಿಕ್ರಿಯೆಯಲ್ಲಿ ತಮ್ಮ ಹಳೆ ವಾದಸರಣಿಯನ್ನು ಮರತೇಬಿಟ್ಟಿದ್ದೀರಲ್ಲ ಗುರುಗಳೇ? ನೀವೇ ತಾನೇ ಹೇಳಿದ್ದು ಸಂಸದರಲ್ಲಿ ಪ್ರಾಮಾಣಿಕತೆಯ ನಿರೀಕ್ಷೆ ಮಾಡಬೇಕಾದಲ್ಲಿ ಮೊದಲು ಸಂಬಳ ಹೆಚ್ಚಿಸಬೇಕು ಎಂದು. ಇದರರ್ಥ ಏನು? ಕಡಿಮೆ ಸಂಬಳ ತಗೊಂಡ್ರೆ ಪ್ರಾಮಾಣಿಕರಾಗಿ ಇರಲು ಕಷ್ಟವೆಂದೇ? ಅದನ್ನೇ ಅನೇಕರು ಕೇಳಿದ್ದು ಸಂಬಳಕ್ಕೂ ಪ್ರಾಮಾಣಿಕತೆಗೂ ಇಲ್ಲದ ಸಂಬಂದ ಕಲ್ಪಿಸಬೇಡಿ ಎಂದು. ಅದಕ್ಕೆ ತಾವು ಕೊಟ್ಟ ಉದಾಹರಣೆ ಅಮೇರಿಕಾ, ಇಂಗ್ಲೆಂಡು ಗಳದ್ದು. ಈ ಥರ ಹೇಳಬೇಕಾದರೆ ನಮ್ಮ ರಾಷ್ಟ್ರದ ಆದಾಯ ಎಷ್ಟಿದೆ ಅದಕ್ಕೆ ಹೋಲಿಸಿದಲ್ಲಿ ನಮ್ಮ ಸಂಸದರಿಗೆ ಕೊಡುವ ಸಂಬಳ ಎಷ್ಟು ಎಂದು ಸ್ವಲ್ಪ ಯೋಚಿಸಬಹುದಿತ್ತು ತಾನೇ (ರೇಖಾಚಿತ್ರಗಳನ್ನು ಬಳಸಿ ಬರೆದ ನನ್ನ ಪೋಸ್ಟ್‘ಗೆ ನಿಮ್ಮ ಉತ್ತರ ಸಿಗಲಿಲ್ಲ!! ನಿಮ್ಮ ಆಪ್ತಸಹಾಯಕನಾದರೂ ಉತ್ತರಿಸಬಹುದಿತ್ತು). ಈಗ ಮಾಹಿತಿ ಹುಡುಕುವುದು ಸುಲಭ ಅನ್ನೋದು ತಮಗೆ ಹೊಳೆಯಲಿಲ್ಲವೇ? ಅದಕ್ಕೆ ತಮ್ಮ ಉತ್ತರವೇನು? ಪ್ರತಿಯೊಂದಕ್ಕೂ ಬೇರೆ ರಾಷ್ಟ್ರಗಳನ್ನ ತೋರಿಸುವುದು ಬಿಡಿ. ಆಮೇಲೆ ನಮ್ಮ ದೇಶದ ನಾಗರೀಕನ ತಲಾ ಆದಾಯ ಗೊತ್ತಿದೆಯೇ ನಿಮಗೆ? ನೀವೇ ೫೦ ಸಾವಿರದಲ್ಲಿ ಸಂಸಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದರೆ ಸಾಮಾನ್ಯ ನಾಗರೀಕನ ಪಾಡೇನು ಗಮನಿಸಿ. ನಿಮಗೆ ಸಂಬಳ ಹೆಚ್ಚು ಬೇಕಿದ್ದಲ್ಲಿ ಕೇಳಿ ಅದಕ್ಕೆ ಯಾರು ಬೇಡವೆನ್ನುತ್ತಾರೆ? ಆದರೆ ತಾವು ಕಡಿಮೆ ಸಂಬಳ ತೆಗೆದುಕೊಳ್ಳುವರ ಪ್ರಾಮಾಣಿಕತೆಯೆನ್ನೇಕೆ ಎಳೆದು ತರುತ್ತೀರಿ. ಇದಕ್ಕೆ ಸರಿಯಾಗಿ ನಿಮ್ಮ ಒಂದಿಬ್ಬರು ಅಭಿಮಾನಿಗಳು ಹೋಟೆಲ್ ಕ್ಯಾಷಿಯರ್ ನ ಉದಾಹರಣೆ ತೆಗೆದುಕೊ೦ಡು ಬರೆದ ಕಥೆಯನ್ನು ಬೇರೆ ಪೋಸ್ಟ್ ಮಾಡುಸಿರುತ್ತೀರಿ (ತಮ್ಮ ಪ್ರತಾಪ್ ಸಿಂಹ MP, ಪುಟದಿಂದ) ತಮ್ಮ ಸಮರ್ಥನೆಗೆ.
ಈಗ ನಿಮ್ಮ ಪ್ರತಿಕ್ರಿಯೆಯಲ್ಲಿ ಬರೆದ ಕೆಲವು ವಿಷಯಗಳ ಬಗ್ಗೆ ಬರೋಣ, ನಿಮಗೆ ಕೆಲಸ ತುಂಬಾ ಇದೆ ಒಪ್ಪೋಣ. ಆದರೆ ಇಡೀ ಸರ್ಕಾರೀ ವ್ಯವಸ್ಥೆಯೇ ನಿಮ್ಮ ಜೊತೆಯಲ್ಲಿ ಇದೆಯಲ್ಲವೇ? ನಿಮ್ಮ ಜೊತೆ ಅನೇಕ ಅಧಿಕಾರಿಗಳು ಕೆಲಸ ಮಾಡುವುದಿಲ್ಲವೇ? ನೀವು ಹೇಳಿದ ಹಾಗೆ ಇಡೀ ಕ್ಷೇತ್ರವನ್ನು ನೋಡಿಕೊಳ್ಳಲು ನೀವೊಬ್ಬರೇ ಇರುವುದಾದರೆ ಈ ಅಧಿಕಾರಿಗಳೆಲ್ಲಾ ಯಾಕೆ? ಹೌದು ಅವರವರ ಅರ್ಹತೆಗೆ ತಕ್ಕ ಹಾಗೆ ಸಂಬಳ ಸಿಗುತ್ತೆ. ಒಬ್ಬ ಜಾಡಮಾಲಿಗೆ ಸಿಗುವ ಸಂಬಳವೇ ಬೇರೆ, ಸಾಫ್ಟ್’ವೇರ್ ಇಂಜಿನೀಯರ್ ಗೆ ಕೊಡುವ ಸಂಬಳವೇ ಬೇರೆ, ಆದರೆ ಅದಕ್ಕೆ ತಕ್ಕ ಹಾಗೆ ಅವನು ಪರೀಕ್ಷೆಗಳನ್ನು ಪಾಸು ಮಾಡಿರುವುದಿಲ್ಲವೇ? ಒಬ್ಬ ಐ ಪಿ ಎಸ್ ಆಗಬೇಕು ಆದ್ರೆ ಅದೆಷ್ಟೋ ವರುಷ ಕುಂಡೆ ನೋಯುವ ಹಾಗೆ ಕೂತು ಓದಿರುವುದಿಲ್ಲವೇ, ಅರ್ಹತಾ ಪರೀಕ್ಷೆ ಪಾಸಾಗಿರುವುದಿಲ್ಲವೇ? ನಿಮ್ಮ ಪ್ರಕಾರ ರಾಜಕಾರಣಿಗಳೂ ಪ್ರೊಫೆಷನಲ್ ಆಗಿ ಸಂಬಳ ಎಣಿಸಬೇಕಾದರೆ ಅವರಿಗೂ ಪರೀಕ್ಷೆ ಇಡಿ. ಸಾರ್ವಜನಿಕ ಆಡಳಿತ, ಭಾರತದ ಸಂವಿಧಾನ ಹಾಗೂ ಇನ್ನಿತರೇ ವಿಷಯಗಳಲ್ಲಿ ಪರೀಕ್ಷೆ ಬರೆದು ಪಾಸಾಗಲಿ. ಈ ತರಹ ಆದರೆ ಇನ್ನೊಂದು ಉಳಿತಾಯವೂ ಆಗುತ್ತೆ. ಅಗ ಐ ಎ ಎಸ್/ಕೆ ಎ ಎಸ್ ಅಧಿಕಾರಿಗಳೇ ಬೇಡ. ನಮ್ಮ ಸಂವಿಧಾನ ಬರೆದವರೆನು ಗುಗ್ಗುಗಳೇ? ನಮ್ಮ ಜನಪ್ರತಿನಿಧಿ ವ್ಯವಸ್ಥೆಯನ್ನು ಈ ರೀತಿ ಇಡಲು. ಇದೆಲ್ಲ ಪೂರ್ವಾಪರಗಳನ್ನು ನೋಡಿಯೇ, ರಾಜಕಾರಣಿಯೆಂದರೆ ಜನಸೇವಕ ಎಂದಿದ್ದು. ಸ್ವಾಮಿ ನಿಮ್ಮಿಂದ ಸುಗಂದರಾಜ ಹಾರವನ್ನು ಯಾರೂ ಬಯಸುವುದಿಲ್ಲ, ನಿಮ್ಮ ಒಂದು ಶುಭ-ಹಾರೈಕೆ ಸಾಕು. ನಿಮ್ಮ ಕಾಫಿ-ಟೀ ಕುಡಿಯೋಕೆ ಜನ ನಿಮ್ಮ ಮನೆಗೆ ಬರೋಲ್ಲ, ತಮ್ಮ ಸಮಸ್ಯೆಗಳು ಪರಿಹಾರವಾದರೆ ಸಾಕು ಅನ್ನೋದು ಅಷ್ಟೇ ಅವರ ಅಭಿಲಾಷೆಯಾಗಿರುತ್ತೆ.
ಆಮೇಲೆ ನಿಮ್ಮ ಸರ್ಕಾರಿ ಶಾಲೆ ಪುರಾಣ, ಸರಳ ಜೀವನದ ಪುರಾಣ ಎಲ್ಲಾ ಹೇಳ್ತಾ ಕೂತರೆ ಈ ಪತ್ರ ಮುಗಿಯುವುದೇ ಇಲ್ಲ. ನಿಮ್ಮ ಥರ ನಮಗೂ ಕೆಲಸಗಳಿರುತ್ತವೆ. ಒಂದೇ ಒಂದು ಕೊನೇ ಮಾತು ಹೇಳಿ ಇದನ್ನ ಇಲ್ಲಿಗೆ ಮುಗಿಸಿಬಿಡ್ತೀನಿ. fb ಪಂಡಿತರು ಅಂದಿರಲ್ಲ, ಅಂತಹ ಪಂಡಿತರದ್ದೂ ನಿಮ್ಮ ಗೆಲುವಿನಲ್ಲಿ ಪಾತ್ರ ಇದೆ. ನಿಮ್ಮ ಗೆಲುವಿನಲ್ಲಿ ಅಷ್ಟೇ ಅಲ್ಲ, ಇವತ್ತು ಮೋದಿಜೀಯವರನ್ನು ಪ್ರಧಾನಿಯನ್ನಾಗಿ ನೋಡೋದಿಕ್ಕೆ ಸೋಶಿಯಲ್ ಮೀಡಿಯಾಗಳೂ ಬಹುದೊಡ್ಡ ಕೊಡುಗೆ ನೀಡಿದ್ದಾವೆ ಅನ್ನೋದು ನಿಮಗೆ ಗೊತ್ತಿರಬೇಕು.
ಆಗ್ಲೇನೆ ಕೊನೆ ಮಾತು ಅಂದಿದ್ದೆ, ಆದರೆ ಇನ್ನೊಂದೇ ಒಂದು ಜರೂರ್ ಮಾತು ಹೇಳಲೇಬೇಕಿದೆ. ಇವತ್ತು ತಮ್ಮನ್ನು ಟೀಕಿಸಿರೋರಲ್ಲಿ ಮುಕ್ಕಾಲು ಪಾಲು ಮಂದಿ ಹಿಂದೊಮ್ಮೆ ತಮ್ಮ ಅಂಕಣಗಳನ್ನು ಓದಿ ಪ್ರಭಾವಿತರಾಗಿದ್ದವರೇ, ತಾವು ಸರಳ ವ್ಯಕ್ತಿಗಳ ಬಗ್ಗೆ ಬರೆದಾಗ ಭೇಷ್ ಅಂದವರೇ, ತಾವು ನಮ್ಮ ನಾಡು-ನುಡಿಯ ಬಗ್ಗೆ, ಭಾಷೆಯ ಬಗ್ಗೆ ಬರೆದಾಗ ಅಹುದಹುದೆಂದವರೇ, ಆದರೆ ನಿಮ್ಮಿಂದ ಈ ತರಹದ ಮಾತುಗಳನ್ನು ನಿರೀಕ್ಷಿಸಿರದ ಅಂತಹ ವ್ಯಕ್ತಿಗಳಿಗೆ ನೀವು ಕನ್ನಡ ಶಾಲೆಯ ಬಗ್ಗೆ, ಕಡಿಮೆ ಸಂಬಳವೂ ಅಪ್ರಾಮಾಣಿಕತೆಗೆ ಕಾರಣ ಎಂಬುವ ಬಗ್ಗೆ, ನಮ್ಮ ದೇಶದ ಆರ್ಥಿಕತೆಯ ಬಗ್ಗೆ ಯೋಚಿಸದೇ ಅಮೇರಿಕಾ, ಇಂಗ್ಲೆಂಡುಗಳಲ್ಲಿ ಸಂಬಳ ಜಾಸ್ತಿ ಅದಕ್ಕೆ ಅಲ್ಲಿ ಪ್ರಾಮಾಣಿಕರು ಜಾಸ್ತಿ ಎಂಬ ನಿಮ್ಮ ವಿಚಿತ್ರ ವಾದಗಳನ್ನು ಬಗ್ಗೆ ಮೊದಲು ಕೇಳಿದಾಗ ಆಘಾತವಾಗುವುದು ಸಹಜ. ಒಂದೆರಡು ಸಾರಿ ಇದೆ ಮುಂದುವರೆದರೆ ಅವರೂ ಅದಕ್ಕೆ ಅಡ್ಜಸ್ಟ್ ಆಗ್ತಾರೆ.
ಬರಹಗಾರನ ಬರಹದಂತೆ ಅವನು ಬದುಕು ಎಂದು ನಂಬಿದ್ದ ನನ್ನದೇ ತಪ್ಪು ಅಷ್ಟೇ. ಈ ವ್ಯಕ್ತಿಯ ಬರಹಗಳನ್ನೇ ನಾನು ಕಾದು ಓದುತ್ತಿದದ್ದು ಎಂದು ನನಗೇ ಆಶ್ಚರ್ಯವಾಗುತ್ತಿದೆ. ಇದೇ ಭಾವನೆ ಅನೇಕರಲ್ಲೂ ಇದೆ ಎಂದು ನನಗನಿಸುತ್ತಿದೆ. ಇನ್ನೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸಿಬಿಡುತ್ತೇನೆ, ಸಂಸದರಿಗೆ ಸಂಬಳ ಜಾಸ್ತಿ ಮಾಡಬೇಕು ಎಂದು ಸಮರ್ಥನೆ ಮಾಡಿಕೊಳ್ಳಲು ಹಲವಾರು ವಿಚಾರಗಳಿದ್ದವು, ಆದರೆ ಪ್ರತಾಪ್’ರವರು ಮಾಡಿದ ವಾದಸರಣಿಯಿಂದ ತುಂಬಾ ಬೇಸರವಾಗ್ತಿದೆ.
ಈಗ ನಿಮ್ಮ ಪ್ರತಿಕ್ರಿಯೆಯಲ್ಲಿ ಬರೆದ ಕೆಲವು ವಿಷಯಗಳ ಬಗ್ಗೆ ಬರೋಣ, ನಿಮಗೆ ಕೆಲಸ ತುಂಬಾ ಇದೆ ಒಪ್ಪೋಣ. ಆದರೆ ಇಡೀ ಸರ್ಕಾರೀ ವ್ಯವಸ್ಥೆಯೇ ನಿಮ್ಮ ಜೊತೆಯಲ್ಲಿ ಇದೆಯಲ್ಲವೇ? ನಿಮ್ಮ ಜೊತೆ ಅನೇಕ ಅಧಿಕಾರಿಗಳು ಕೆಲಸ ಮಾಡುವುದಿಲ್ಲವೇ? ನೀವು ಹೇಳಿದ ಹಾಗೆ ಇಡೀ ಕ್ಷೇತ್ರವನ್ನು ನೋಡಿಕೊಳ್ಳಲು ನೀವೊಬ್ಬರೇ ಇರುವುದಾದರೆ ಈ ಅಧಿಕಾರಿಗಳೆಲ್ಲಾ ಯಾಕೆ? ಹೌದು ಅವರವರ ಅರ್ಹತೆಗೆ ತಕ್ಕ ಹಾಗೆ ಸಂಬಳ ಸಿಗುತ್ತೆ. ಒಬ್ಬ ಜಾಡಮಾಲಿಗೆ ಸಿಗುವ ಸಂಬಳವೇ ಬೇರೆ, ಸಾಫ್ಟ್’ವೇರ್ ಇಂಜಿನೀಯರ್ ಗೆ ಕೊಡುವ ಸಂಬಳವೇ ಬೇರೆ, ಆದರೆ ಅದಕ್ಕೆ ತಕ್ಕ ಹಾಗೆ ಅವನು ಪರೀಕ್ಷೆಗಳನ್ನು ಪಾಸು ಮಾಡಿರುವುದಿಲ್ಲವೇ? ಒಬ್ಬ ಐ ಪಿ ಎಸ್ ಆಗಬೇಕು ಆದ್ರೆ ಅದೆಷ್ಟೋ ವರುಷ ಕುಂಡೆ ನೋಯುವ ಹಾಗೆ ಕೂತು ಓದಿರುವುದಿಲ್ಲವೇ, ಅರ್ಹತಾ ಪರೀಕ್ಷೆ ಪಾಸಾಗಿರುವುದಿಲ್ಲವೇ? ನಿಮ್ಮ ಪ್ರಕಾರ ರಾಜಕಾರಣಿಗಳೂ ಪ್ರೊಫೆಷನಲ್ ಆಗಿ ಸಂಬಳ ಎಣಿಸಬೇಕಾದರೆ ಅವರಿಗೂ ಪರೀಕ್ಷೆ ಇಡಿ. ಸಾರ್ವಜನಿಕ ಆಡಳಿತ, ಭಾರತದ ಸಂವಿಧಾನ ಹಾಗೂ ಇನ್ನಿತರೇ ವಿಷಯಗಳಲ್ಲಿ ಪರೀಕ್ಷೆ ಬರೆದು ಪಾಸಾಗಲಿ. ಈ ತರಹ ಆದರೆ ಇನ್ನೊಂದು ಉಳಿತಾಯವೂ ಆಗುತ್ತೆ. ಅಗ ಐ ಎ ಎಸ್/ಕೆ ಎ ಎಸ್ ಅಧಿಕಾರಿಗಳೇ ಬೇಡ. ನಮ್ಮ ಸಂವಿಧಾನ ಬರೆದವರೆನು ಗುಗ್ಗುಗಳೇ? ನಮ್ಮ ಜನಪ್ರತಿನಿಧಿ ವ್ಯವಸ್ಥೆಯನ್ನು ಈ ರೀತಿ ಇಡಲು. ಇದೆಲ್ಲ ಪೂರ್ವಾಪರಗಳನ್ನು ನೋಡಿಯೇ, ರಾಜಕಾರಣಿಯೆಂದರೆ ಜನಸೇವಕ ಎಂದಿದ್ದು. ಸ್ವಾಮಿ ನಿಮ್ಮಿಂದ ಸುಗಂದರಾಜ ಹಾರವನ್ನು ಯಾರೂ ಬಯಸುವುದಿಲ್ಲ, ನಿಮ್ಮ ಒಂದು ಶುಭ-ಹಾರೈಕೆ ಸಾಕು. ನಿಮ್ಮ ಕಾಫಿ-ಟೀ ಕುಡಿಯೋಕೆ ಜನ ನಿಮ್ಮ ಮನೆಗೆ ಬರೋಲ್ಲ, ತಮ್ಮ ಸಮಸ್ಯೆಗಳು ಪರಿಹಾರವಾದರೆ ಸಾಕು ಅನ್ನೋದು ಅಷ್ಟೇ ಅವರ ಅಭಿಲಾಷೆಯಾಗಿರುತ್ತೆ.
ಆಮೇಲೆ ನಿಮ್ಮ ಸರ್ಕಾರಿ ಶಾಲೆ ಪುರಾಣ, ಸರಳ ಜೀವನದ ಪುರಾಣ ಎಲ್ಲಾ ಹೇಳ್ತಾ ಕೂತರೆ ಈ ಪತ್ರ ಮುಗಿಯುವುದೇ ಇಲ್ಲ. ನಿಮ್ಮ ಥರ ನಮಗೂ ಕೆಲಸಗಳಿರುತ್ತವೆ. ಒಂದೇ ಒಂದು ಕೊನೇ ಮಾತು ಹೇಳಿ ಇದನ್ನ ಇಲ್ಲಿಗೆ ಮುಗಿಸಿಬಿಡ್ತೀನಿ. fb ಪಂಡಿತರು ಅಂದಿರಲ್ಲ, ಅಂತಹ ಪಂಡಿತರದ್ದೂ ನಿಮ್ಮ ಗೆಲುವಿನಲ್ಲಿ ಪಾತ್ರ ಇದೆ. ನಿಮ್ಮ ಗೆಲುವಿನಲ್ಲಿ ಅಷ್ಟೇ ಅಲ್ಲ, ಇವತ್ತು ಮೋದಿಜೀಯವರನ್ನು ಪ್ರಧಾನಿಯನ್ನಾಗಿ ನೋಡೋದಿಕ್ಕೆ ಸೋಶಿಯಲ್ ಮೀಡಿಯಾಗಳೂ ಬಹುದೊಡ್ಡ ಕೊಡುಗೆ ನೀಡಿದ್ದಾವೆ ಅನ್ನೋದು ನಿಮಗೆ ಗೊತ್ತಿರಬೇಕು.
ಆಗ್ಲೇನೆ ಕೊನೆ ಮಾತು ಅಂದಿದ್ದೆ, ಆದರೆ ಇನ್ನೊಂದೇ ಒಂದು ಜರೂರ್ ಮಾತು ಹೇಳಲೇಬೇಕಿದೆ. ಇವತ್ತು ತಮ್ಮನ್ನು ಟೀಕಿಸಿರೋರಲ್ಲಿ ಮುಕ್ಕಾಲು ಪಾಲು ಮಂದಿ ಹಿಂದೊಮ್ಮೆ ತಮ್ಮ ಅಂಕಣಗಳನ್ನು ಓದಿ ಪ್ರಭಾವಿತರಾಗಿದ್ದವರೇ, ತಾವು ಸರಳ ವ್ಯಕ್ತಿಗಳ ಬಗ್ಗೆ ಬರೆದಾಗ ಭೇಷ್ ಅಂದವರೇ, ತಾವು ನಮ್ಮ ನಾಡು-ನುಡಿಯ ಬಗ್ಗೆ, ಭಾಷೆಯ ಬಗ್ಗೆ ಬರೆದಾಗ ಅಹುದಹುದೆಂದವರೇ, ಆದರೆ ನಿಮ್ಮಿಂದ ಈ ತರಹದ ಮಾತುಗಳನ್ನು ನಿರೀಕ್ಷಿಸಿರದ ಅಂತಹ ವ್ಯಕ್ತಿಗಳಿಗೆ ನೀವು ಕನ್ನಡ ಶಾಲೆಯ ಬಗ್ಗೆ, ಕಡಿಮೆ ಸಂಬಳವೂ ಅಪ್ರಾಮಾಣಿಕತೆಗೆ ಕಾರಣ ಎಂಬುವ ಬಗ್ಗೆ, ನಮ್ಮ ದೇಶದ ಆರ್ಥಿಕತೆಯ ಬಗ್ಗೆ ಯೋಚಿಸದೇ ಅಮೇರಿಕಾ, ಇಂಗ್ಲೆಂಡುಗಳಲ್ಲಿ ಸಂಬಳ ಜಾಸ್ತಿ ಅದಕ್ಕೆ ಅಲ್ಲಿ ಪ್ರಾಮಾಣಿಕರು ಜಾಸ್ತಿ ಎಂಬ ನಿಮ್ಮ ವಿಚಿತ್ರ ವಾದಗಳನ್ನು ಬಗ್ಗೆ ಮೊದಲು ಕೇಳಿದಾಗ ಆಘಾತವಾಗುವುದು ಸಹಜ. ಒಂದೆರಡು ಸಾರಿ ಇದೆ ಮುಂದುವರೆದರೆ ಅವರೂ ಅದಕ್ಕೆ ಅಡ್ಜಸ್ಟ್ ಆಗ್ತಾರೆ.
ಬರಹಗಾರನ ಬರಹದಂತೆ ಅವನು ಬದುಕು ಎಂದು ನಂಬಿದ್ದ ನನ್ನದೇ ತಪ್ಪು ಅಷ್ಟೇ. ಈ ವ್ಯಕ್ತಿಯ ಬರಹಗಳನ್ನೇ ನಾನು ಕಾದು ಓದುತ್ತಿದದ್ದು ಎಂದು ನನಗೇ ಆಶ್ಚರ್ಯವಾಗುತ್ತಿದೆ. ಇದೇ ಭಾವನೆ ಅನೇಕರಲ್ಲೂ ಇದೆ ಎಂದು ನನಗನಿಸುತ್ತಿದೆ. ಇನ್ನೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸಿಬಿಡುತ್ತೇನೆ, ಸಂಸದರಿಗೆ ಸಂಬಳ ಜಾಸ್ತಿ ಮಾಡಬೇಕು ಎಂದು ಸಮರ್ಥನೆ ಮಾಡಿಕೊಳ್ಳಲು ಹಲವಾರು ವಿಚಾರಗಳಿದ್ದವು, ಆದರೆ ಪ್ರತಾಪ್’ರವರು ಮಾಡಿದ ವಾದಸರಣಿಯಿಂದ ತುಂಬಾ ಬೇಸರವಾಗ್ತಿದೆ.
No comments:
Post a Comment