ಮೊನ್ನ್ನೆ ಮೊನ್ನೆ ತಾನೇ ನಮ್ಮ ದೇಶದ ಆಟಗಾರರು ಕ್ರಿಕೆಟ್ ವಿಶ್ವ ಪಾರಿತೋಷಕ ಗೆದ್ದರು. ಅದರ ಬೆನ್ನ ಹಿಂದೆ ಶುರುವಾದ ನಮ್ಮ ವಿಜಯೋತ್ಸವ ಇನ್ನೂ ನಿಂತಿಲ್ಲ. ಆಟಗಾರರಿಗೆ ಬಗೆ ಬಗೆಯ ಬಹುಮಾನಗಳನ್ನೂ ಘೋಷಣೆ ಮಾಡಲಾಯಿತು. ನಾಮುಂದು ತಾಮುಂದು ಎಂದು ನಮ್ಮ ದೇಶದ ರಾಜಕಾರಣಿಗಳು, ವಾಣಿಜ್ಯ ಜಗತ್ತಿನ ದಿಗ್ಗಜರು ಕೋಟ್ಯಂತರ ರುಪಾಯಿ ಮೌಲ್ಯದ ಬಹುಮಾನಗಳನ್ನು ಕೊಟ್ಟರು. ನಮ್ಮ ಭೂ ಪುತ್ರ ಯಡಿಯೂರಪ್ಪನವರೂ ಕೂಡ ಎಲ್ಲ ಆಟಗಾರರಿಗೂ ಒಂದೊಂದು ನಿವೇಶನ ಕೊಡುವುದಾಗಿ ಹೇಳಿದಾಗ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಎರಡು ಮೂರು ತಿಂಗಳುಗಳ ಹಿಂದೆಯಷ್ಟೇ ನಮ್ಮ ರಾಜ್ಯದ ಕೆಲವೊಬ್ಬ ಪ್ರತಿಭಾನ್ವಿತ ಕ್ರೀಡಾಪಟುಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದಾಗಲೂ ಅವರಿಗೆ ಸಿಕ್ಕಿದ್ದು ಬರಿ ಆಶ್ವಾಸನೆಗಳಷ್ಟೇ. ನಮ್ಮ ಜನರಿಗೆ, ಆಳುವ ದೊರೆಗಳಿಗೆ ಕ್ರಿಕೆಟ್ ಬಿಟ್ರೆ ಬೇರೆ ಆಟವೇ ಗೊತ್ತಿಲ್ಲವೇ.
ನಾವು ಕೂಡ ಏನೂ ಸಾಚಗಳಲ್ಲ, ಕ್ರಿಕೆಟ್ ಇದ್ದಾಗ ಕೆಲಸ ಬಿಟ್ಟು ನೋಡುವ ನಾವು ಬೇರೆ ಕ್ರೀಡೆಗಳ ಬಗ್ಗೆ ಯಾವುದೇ ಆಸ್ಥೆ ತೋರಿಸುವುದಿಲ್ಲ.
ಕ್ರಿಕೆಟ್ ಈಗೀಗ ಬರಿ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಹಣ ಮಾಡುವ ದಂದೆ ಯಾಗಿ ಬದಲಾಗಿದೆ. ನೀವೇ ಯೋಚನೆ ಮಾಡಿ, ನಮ್ಮ ಕರ್ನಾಟಕ ದಲ್ಲಿ ಈಗ ಬರಿ ಲೋಡ್ ಶೆಡ್ಡಿಂಗ್ ನದ್ದೇ ರಾಜ್ಯಭಾರ. ಆದರೆ ಕ್ರಿಕೆಟ್ ಹಗಲು-ರಾತ್ರಿ ಪಂದ್ಯಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಒಂದೇ ಒಂದು ಹಗಲು-ರಾತ್ರಿ ಪಂದ್ಯ (ಅರ್ಹನಿಶಿ ಪಂದ್ಯ ಅಂತಲೂ ಅನ್ನಬಹುದು) ವನ್ನು ರದ್ದು ಮಾಡಿ ಬರಿ ಹಗಲೇ ಆಡಿದರೆ ಅದೆಷ್ಟು ಮನೆಗಳಿಗೆ ವಿದ್ಯುತ್ ಕೊಡಬಹುದಲ್ಲವೇ? ಮತ್ತೆ ಐ ಪಿ ಎಲ್ ಬೇರೆ ಶುರು ಆಗಿದೆ. ಈ ಪಂದ್ಯಗಲಂತೂ ಬರಿ ರಾತ್ರಿಯಷ್ಟೇ ಆಡಬಲ್ಲ ಪಂದ್ಯಗಳೆನೋ ಅನ್ನುವ ಹಾಗೆ ಮಾರ್ಪಾಡು ಮಾಡಿಬಿಟ್ಟಿದ್ದಾರೆ. ಒಂದು ಅರ್ಥ ಆಗ್ತಾ ಇಲ್ಲ ನನಗೆ, ಹಗಲು-ರಾತ್ರಿ ಪಂದ್ಯಗಳ ಬದಲಿಗೆ ಬೆಳಿಗಿನ ಜಾವ ಐದಕ್ಕೆ ಶುರು ಮಾಡಿದರೆ ದಣಿವು ಆಗುವುದಿಲ್ಲ ಹಾಗು ದೇಹಕ್ಕೂ ಒಳ್ಳೆಯದು. ಈ ರೀತಿ ಮಾಡಿದರೆ ವಿದ್ಯುತ್ ಉಳಿತಾಯವೂ ಆಗುತ್ತೆ. ಪರಿಸರವೂ ಹಾಳಗುವುದಿಲ್ಲ.
ನಮ್ಮ ದೇಶದ ರೈತನ ಬೆಳೆಗಳು ಹಾಳಾಗುತ್ತ ಇವೆ ಕಾರಣ ಮಳೆ ಇಲ್ಲ, ನೀರಾವರಿ ಎಲ್ಲ ಕಡೆಗೂ ಇಲ್ಲ. ಸಾಲ-ಸೋಲ ಮಾಡಿ ಬಾವಿ ಅಥವಾ ಕೊಳವೆ ಬಾವಿ ಬಳಸಿ ನೀರಾವರಿ ಮಾಡಿಕೊಂಡರೆ ನೀರೆತ್ತಲು ವಿದ್ಯುತ್ ಇಲ್ಲ. ಈ ದೇಶದ ಜನಕ್ಕೆ ತಿನ್ನೋ ಅನ್ನಕಿ೦ತಲೂ ಕ್ರಿಕೆಟ್ ಪ್ರೀತಿ ಜಾಸ್ತಿ. ಮೊನ್ನೆ ಮೊನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಎಸ್ಸ್ ಎಸ್ಸ್ ಎಲ್ ಸಿ ಪರೀಕ್ಷೆ ಗಳು ಇದ್ದಾಗಲೂ ನಮ್ಮ ಸರ್ಕಾರಗಳಿಗೆ ತಡೆ ರಹಿತ ವಿದ್ಯುತ್ ಕೊಡಲಿಕ್ಕೆ ಆಗಲಿಲ್ಲ. ಆದರೆ ಕ್ರಿಕೆಟ್ ಪಂದ್ಯಗಳು ಮಾತ್ರ ಸಾಂಗವಾಗಿ ನೆರವೇರಿದವು.
ಹೀಗೆ ಆಗುತ್ತಾ ಇದ್ರೆ ಮುಂದಿನ ದಿನಗಳು ಹ್ಯಾಗಿರುತ್ತವೆಯೋ. ಜೇಬಲ್ಲಿ ಸಿಕ್ಕಾಪಟ್ಟೆ ಹಣ ಇರುತ್ತೆ ಆದರೆ ತಿನ್ನೋದಿಕ್ಕೆ ಏನೂ ಸಿಗದೇ ಸಾಯೋ ಪರಿಸ್ತಿತಿ ಬರಬಹುದು. ಕೃಷಿ ಬಗ್ಗೆ ನಾವು ತಳೆದಿರುವ ಧಿವ್ಯ ನಿರ್ಲಕ್ಷ್ಯ ಮುಂದೊಂದು ದಿನ ನಮ್ಮನ್ನು ಸುಡದೆ ಬಿಡಲಾರದು. ನಮ್ಮ ಪರಿಸ್ತಿತಿ ಹ್ಯಾಗೆ ಆಗಿದೆ ಅಂದ್ರೆ ನಾವು ಆರಿಸಿ ಕಳಿಸಿದ ಕೃಷಿ ಮಂತ್ರಿ ಕ್ರಿಕೆಟ್ ಆಡಿಸುತ್ತ ಕಾಲ ಕಳೆಯುತ್ತಾ ಇದ್ರೂ ನಾವು ಏನೂ ಮಾಡಲಾರದ ಸ್ಥಿತಿ ತಲುಪಿಬಿತ್ತಿದ್ದೇವೆ.
Dear Nagaraj,
ReplyDeleteYour thoughts are good but people should understand and elect clean background ministers. Unfortunately, they are very few. Lets hope for the best atleast in the future.
Yes you are absolutely correct. In the same time we should also agree that we ourself are the culprits.
ReplyDelete